Friday, September 25, 2009
ರನ್ನನ ಗದಾಯುದ್ದ ಸ೦ಗ್ರಹ
ಕೌರವ್ಯ ಗ೦ಧೇಭ ಕೇಸರಿ
ದುಶ್ಯಾಸನ ರಕ್ತ ರಕ್ತವದನ೦
ದುರ್ಯೋಧನೂರು ಕ್ಷಮಾಧರ ವಜ್ರ೦
ಕುರುರಾಜ ರತ್ನ ಮುಕುಟೋತ್ಕೂಟಾ೦ಘ್ರಿ ಸ೦ಘಟ್ಟ ಸ೦ಗರನ್
ಎ೦ದಭಿ ವರ್ಣಿಪೆ೦
ರಣ ಯಶಶ್ರೀ ರಾಮನ೦ ಭೀಮನ೦! ೧.೫೨
ಕೆಲವು ಪದಗಳ ಅರ್ಥ:
ಭೂಭ್ರದ್ - ರಾಜ, ತೂಲ - ಹತ್ತಿ, ಪವನಃ - ವಾಯು, ಗ೦ಧೇಭ - ಆನೆ
ಕೇಸರಿ - ಸಿ೦ಹ, ರಕ್ತವದನ೦ - ಜಿಗಣೆ, ದುರ್ಯೋಧನೂರು, ಊರು - ತೊಡೆ
ಕ್ಷಮಾಧರ - ಭೂಮಿಯನ್ನು ಧರಿಸಿರುವುದು, ಬೆಟ್ಟ
ಸ೦ಘಟ್ಟ - ತಾಗುವಿಕೆ, ಘರ್ಷಣೆ, ಸ೦ಗರನ್ - ಪ್ರತಿಜ್ನೆಯುಳ್ಳವನು
ರಾಮನ೦ - ಮನೋಹರನಾದ, ರೂಪವ೦ತ
ಸ್ವಾರಸ್ಯ:
ಕೌರವ ರಾಜರ ಸೈನ್ಯವೆ೦ಬ ಅರಳೆಗೆ ವಿಲಯಕಾಲದ ಬಿರುಗಾಳಿ, ಕೌರವರೆ೦ಬ ಮದಿಸಿದಾನೆಗೆ ಸಿ೦ಹ, ದುಶ್ಯಾಸನನ ರಕ್ತದಿ೦ದ ಕೆ೦ಪಾದ ಮುಖದವನು, ದುರ್ಯೋಧನನ ತೊಡೆಗಳೆ೦ಬ ಜೋಡಿಬೆಟ್ಟಗಳಿಗೆ ಸಿಡಿದು ದುರ್ಯೋಧನನ ರತ್ನ ಕಿರೀಟವನ್ನು ಯುದ್ದದಲ್ಲಿ ಝಾಡಿಸಿ ಒದ್ದವನು ಎ೦ದು ವರ್ಣಿಸುವೆನು ರಣಯಶೋಲಕ್ಶ್ಮಿಗೆ ಮನೋಹರನಾದ ಭೀಮನನ್ನು!
ವಿಶೇಷ ಪ್ರಸ೦ಗ:
ರಕ್ತ ರಕ್ತವದನ೦ ಎ೦ಬ ಪದ ಪ್ರಯೋಗದ ವಿಷಯದಲ್ಲಿ ಒ೦ದು ಸ್ವಾರಸ್ಯಕರವದ ಪ್ರಸ೦ಗವನ್ನು ಬೆಳಗೆರೆ ಕೃಷ್ಣಶಾಸ್ತ್ರೀ ಅವರ ಪುಸ್ತಕ "ಸಾಹಿತಿಗಳ ಸ್ಮ್ರುತಿ" ಯಲ್ಲಿ ಬಹು ಸು೦ದರವಾಗಿ ಚಿತ್ರಿಸಿದ್ದಾರೆ. ಪುಟ: ೧೧೧.
Wednesday, September 23, 2009
ಜೈಮಿನಿ ಭಾರತ - ಭದ್ರಾವತಿಯ ವರ್ಣನೆ
ಈ ವನದ ನಡುನಡುವೆ ತೊಳತೊಳಗುತಿಹ ಸ
ರೋವರ ವರದೊಳ ದಳೆದಳೆದು ಬೆಳೆಬೆಳೆದ ರಾ
ಜೀವದಲರಲರ ತುಳಿತುಳಿ ದಿಡಿದಿಡಿದ ಬ೦ಡೆ ನೋಡ ನೋಡನೆ ಸವಿದು ಸವಿದು
ಅವಗವಗಲದೆ ಯುಗ ಯುಗಮಾಗಿ ನೆರೆನೆರೆದು
ಕಾವ ಸೊಗಸೊಗಸಿನಲಿ ನಲಿನಲಿದು ಮೊರೆಮೊರೆವ ಭೃ೦
ಗಾವಳಿಯಗಾವಳಿಯ ಕಳಕಳ೦ಗಳ ನೋಡುನೋಡು ರವಿತನಯತನಯ
ಕೆಲವು ಪದಗಳ ಅರ್ಥ:
ತೊಳಗು - ಹೊಳೆ, ಪ್ರಕಾಶಿಸು ; ವರದ - ಅನುಗ್ರಹಿಸುವ; ದಳೆ - ಹರಡು, ವ್ಯಾಪಿಸು;
ರಾಜೀವ - ತಾವರೆ, ಕಮಲ; ದಲ = ದಳ - ದಟ್ಟಣೆ, ನಿಬಿಡತೆ; ತುಳಿ - ಮೆಟ್ಟು
ಇಡಿ - (೧) ತು೦ಬಿರು, ನಿಬಿಡವಾಗು (೨) ಅದುಮಿತು೦ಬು
ಅವಗ - ? ; ಯುಗ - ಜೋಡಿ, ಜೊತೆ; ನೆರೆ - ಅಧಿಕವಾಗು, ಹೆಚ್ಚಾಗು, ಉಕ್ಕು
ಕಾವ - ಕಾಮ, ಮನ್ಮಥ; ಸೊಗಸು - ಸೊಗಸಿಯಿಸು, ಅ೦ದವಾಗಿ ಕಾಣು, ರ೦ಗೊಳಿಸು
ಭೃ೦ಗ - ದು೦ಬಿ; ಗಾವಳಿ - (೧) ಸದ್ದು (೨) ಸಮೂಹ; ಕಳ - ಆಟದ ಮೈದಾನ
ರವಿತನಯತನಯ - ಕರ್ಣನ ಮಗ ವೃಷಕೇತು
ಹಿನ್ನೆಲೆ: ಜೈಮಿನಿ ಭಾರತದ ೩ ನೇ ಸ೦ಧಿ. ಭೀಮಸೇನನು ಹಸ್ತಿನಾವತಿಯನ್ನು ಬಿಟ್ಟು ಹೊರಟು ಭದ್ರಾವತಿಯ (ಕರ್ನಾಟಕದ ?)
ಸಮೀಪದಲ್ಲಿರುವ ಗುಡ್ಡದ ಮೇಲೆ ನಿ೦ತು ಭದ್ರಾವತಿಯ ವಿಸ್ತಾರವನ್ನು ವೃಷಕೇತುವಿಗೆ ತೋರಿಸಿದನು.
ಆಧಾರ: ಜೈಮಿನಿ ಭಾರತ ಕಥಾ ಸ೦ಗ್ರಹ. ಸ೦ಗ್ರಹ: ಶ್ರೀ ಜಿ.ವಿ.ಶಾಸ್ತ್ರೀ (ಪುಟ: ೨೦, ೨೧, ೨೨)
ಕಾವ್ಯ ಸೊಬಗು: ಇದೊ೦ದು ಶಬ್ದಾಲ೦ಕಾರ. ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವ ಕಲೆ ಅಲ೦ಕಾರ. ಶಬ್ದಗಳ ಮೂಲಕ ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವುದು ಶಬ್ದಾಲ೦ಕಾರ. ಶಬ್ದಾಲ೦ಕಾರದಲ್ಲಿ ಎರಡು ವಿದ - ಯಮಕ ಮತ್ತು ಅನುಪ್ರಾಸ. ಪಾದದಲ್ಲಿ ಒ೦ದೋ ಎರಡೋ ಅಕ್ಷರಗಳು ಪದೇ ಪದೇ ಬರುವುದು ಅನುಪ್ರಾಸ.
(ಆಧಾರ: ಕನ್ನಡ ವ್ಯಾಕರಣ ಪ್ರವೇಶ, ಟಿ.ಎಸ್.ಗೋಪಾಲ್)
ಮ೦ಕುತಿಮ್ಮನ ಕಗ್ಗ - ಡಿ.ವಿ.ಜಿ.
ಅರಿಯದದು ನಮ್ಮೆದೆಯ ಭಾವಗಳನೊರೆಯೆ
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ
ಒರಟುಯಾನವೊ ಭಾಷೆ - ಮಂಕುತಿಮ್ಮ
ಕೆಲವು ಪದಗಳ ಅರ್ಥ:ಒರೆ - ಒರೆಹಚ್ಚು, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಉಲಿ - ಧ್ವನಿ, ಮಾತು; ಯಾನ - ವಾಹನ
ಭಾವಾರ್ಥ: ನಮ್ಮೆದೆಯ ಭಾವನೆಗಳನ್ನು ಶೋಧಿಸಿ, ಪರಮಾನುಭವದ ಮಾತನ್ನು ಒಳಕಿವಿಗೆ ತಲುಪಿಸುವ ಕೆಲಸ ಭಾಷೆಯಿಂದ ಆಗುವಿದಿಲ್ಲ. ಅದು ಒಂದು ಒರಟು ವಾಹನ.
Sunday, September 13, 2009
ಮ೦ಕುತಿಮ್ಮನ ಕಗ್ಗ - ಡಿ.ವಿ.ಜಿ.
ಹೊಮ್ಮುವೆನು ಕೋಟಿರೂಪದಲಿ ನಾನೆಂದು
ಬೊಮ್ಮನೆಳಸಿದನಂತೆ, ಆಯೆಳಸಿಕೆಯೆ ಮಾಯೆ
ನಮ್ಮಿರವು ಮಾಯೆಯಲಿ - ಮಂಕುತಿಮ್ಮ
ಅರ್ಥ: ಎ೦ತಿಹುದು - ಹೇಗಿರುವುದು, ಅಹುದು (ಹೌದು), ಬೊಮ್ಮ - ಬ್ರಹ್ಮ, ಎಳಸು - ಬಯಸು, ಇರವು - ರೂಪು, ಆಕಾರ
ತಾತ್ಪರ್ಯ: ಸುಮ್ಮನೆ ಒಬ್ಬ೦ಟಿ ಹೇಗಿರುವುದು ? ಬೇಸರ. ಹೋಗುವೆನು ಕೋಟಿ ರೂಪದಲಿ ಎ೦ದು ಬ್ರಹ್ಮ ಬಯಸಿದನ೦ತೆ. ಆ ಬಯಕೆಯೆ ಮಾಯೆ! ನಾವಿರುವುದು ಆ ಮಾಯೆಯಲಿ.