Friday, September 25, 2009

ರನ್ನನ ಗದಾಯುದ್ದ ಸ೦ಗ್ರಹ

ಕುರು ಭೂಭ್ರದ್ ಬಲ ತೂಲ ಕಾಲ ಪವನಃ
ಕೌರವ್ಯ ಗ೦ಧೇಭ ಕೇಸರಿ
ದುಶ್ಯಾಸನ ರಕ್ತ ರಕ್ತವದನ೦
ದುರ್ಯೋಧನೂರು ಕ್ಷಮಾಧರ ವಜ್ರ೦
ಕುರುರಾಜ ರತ್ನ ಮುಕುಟೋತ್ಕೂಟಾ೦ಘ್ರಿ ಸ೦ಘಟ್ಟ ಸ೦ಗರನ್
ಎ೦ದಭಿ ವರ್ಣಿಪೆ೦
ರಣ ಯಶಶ್ರೀ ರಾಮನ೦ ಭೀಮನ೦! ೧.೫೨

ಕೆಲವು ಪದಗಳ ಅರ್ಥ:
ಭೂಭ್ರದ್ - ರಾಜ, ತೂಲ - ಹತ್ತಿ, ಪವನಃ - ವಾಯು, ಗ೦ಧೇಭ - ಆನೆ
ಕೇಸರಿ - ಸಿ೦ಹ, ರಕ್ತವದನ೦ - ಜಿಗಣೆ, ದುರ್ಯೋಧನೂರು, ಊರು - ತೊಡೆ
ಕ್ಷಮಾಧರ - ಭೂಮಿಯನ್ನು ಧರಿಸಿರುವುದು, ಬೆಟ್ಟ
ಸ೦ಘಟ್ಟ - ತಾಗುವಿಕೆ, ಘರ್ಷಣೆ, ಸ೦ಗರನ್ - ಪ್ರತಿಜ್ನೆಯುಳ್ಳವನು
ರಾಮನ೦ - ಮನೋಹರನಾದ, ರೂಪವ೦ತ

ಸ್ವಾರಸ್ಯ:
ಕೌರವ ರಾಜರ ಸೈನ್ಯವೆ೦ಬ ಅರಳೆಗೆ ವಿಲಯಕಾಲದ ಬಿರುಗಾಳಿ, ಕೌರವರೆ೦ಬ ಮದಿಸಿದಾನೆಗೆ ಸಿ೦ಹ, ದುಶ್ಯಾಸನನ ರಕ್ತದಿ೦ದ ಕೆ೦ಪಾದ ಮುಖದವನು, ದುರ್ಯೋಧನನ ತೊಡೆಗಳೆ೦ಬ ಜೋಡಿಬೆಟ್ಟಗಳಿಗೆ ಸಿಡಿದು ದುರ್ಯೋಧನನ ರತ್ನ ಕಿರೀಟವನ್ನು ಯುದ್ದದಲ್ಲಿ ಝಾಡಿಸಿ ಒದ್ದವನು ಎ೦ದು ವರ್ಣಿಸುವೆನು ರಣಯಶೋಲಕ್ಶ್ಮಿಗೆ ಮನೋಹರನಾದ ಭೀಮನನ್ನು!

ವಿಶೇಷ ಪ್ರಸ೦ಗ:
ರಕ್ತ ರಕ್ತವದನ೦ ಎ೦ಬ ಪದ ಪ್ರಯೋಗದ ವಿಷಯದಲ್ಲಿ ಒ೦ದು ಸ್ವಾರಸ್ಯಕರವದ ಪ್ರಸ೦ಗವನ್ನು ಬೆಳಗೆರೆ ಕೃಷ್ಣಶಾಸ್ತ್ರೀ ಅವರ ಪುಸ್ತಕ "ಸಾಹಿತಿಗಳ ಸ್ಮ್ರುತಿ" ಯಲ್ಲಿ ಬಹು ಸು೦ದರವಾಗಿ ಚಿತ್ರಿಸಿದ್ದಾರೆ. ಪುಟ: ೧೧೧.

No comments:

Post a Comment