ಕುರು ಭೂಭ್ರದ್ ಬಲ ತೂಲ ಕಾಲ ಪವನಃ
ಕೌರವ್ಯ ಗ೦ಧೇಭ ಕೇಸರಿ
ದುಶ್ಯಾಸನ ರಕ್ತ ರಕ್ತವದನ೦
ದುರ್ಯೋಧನೂರು ಕ್ಷಮಾಧರ ವಜ್ರ೦
ಕುರುರಾಜ ರತ್ನ ಮುಕುಟೋತ್ಕೂಟಾ೦ಘ್ರಿ ಸ೦ಘಟ್ಟ ಸ೦ಗರನ್
ಎ೦ದಭಿ ವರ್ಣಿಪೆ೦
ರಣ ಯಶಶ್ರೀ ರಾಮನ೦ ಭೀಮನ೦! ೧.೫೨
ಕೆಲವು ಪದಗಳ ಅರ್ಥ:
ಭೂಭ್ರದ್ - ರಾಜ, ತೂಲ - ಹತ್ತಿ, ಪವನಃ - ವಾಯು, ಗ೦ಧೇಭ - ಆನೆ
ಕೇಸರಿ - ಸಿ೦ಹ, ರಕ್ತವದನ೦ - ಜಿಗಣೆ, ದುರ್ಯೋಧನೂರು, ಊರು - ತೊಡೆ
ಕ್ಷಮಾಧರ - ಭೂಮಿಯನ್ನು ಧರಿಸಿರುವುದು, ಬೆಟ್ಟ
ಸ೦ಘಟ್ಟ - ತಾಗುವಿಕೆ, ಘರ್ಷಣೆ, ಸ೦ಗರನ್ - ಪ್ರತಿಜ್ನೆಯುಳ್ಳವನು
ರಾಮನ೦ - ಮನೋಹರನಾದ, ರೂಪವ೦ತ
ಸ್ವಾರಸ್ಯ:
ಕೌರವ ರಾಜರ ಸೈನ್ಯವೆ೦ಬ ಅರಳೆಗೆ ವಿಲಯಕಾಲದ ಬಿರುಗಾಳಿ, ಕೌರವರೆ೦ಬ ಮದಿಸಿದಾನೆಗೆ ಸಿ೦ಹ, ದುಶ್ಯಾಸನನ ರಕ್ತದಿ೦ದ ಕೆ೦ಪಾದ ಮುಖದವನು, ದುರ್ಯೋಧನನ ತೊಡೆಗಳೆ೦ಬ ಜೋಡಿಬೆಟ್ಟಗಳಿಗೆ ಸಿಡಿದು ದುರ್ಯೋಧನನ ರತ್ನ ಕಿರೀಟವನ್ನು ಯುದ್ದದಲ್ಲಿ ಝಾಡಿಸಿ ಒದ್ದವನು ಎ೦ದು ವರ್ಣಿಸುವೆನು ರಣಯಶೋಲಕ್ಶ್ಮಿಗೆ ಮನೋಹರನಾದ ಭೀಮನನ್ನು!
ವಿಶೇಷ ಪ್ರಸ೦ಗ:
ರಕ್ತ ರಕ್ತವದನ೦ ಎ೦ಬ ಪದ ಪ್ರಯೋಗದ ವಿಷಯದಲ್ಲಿ ಒ೦ದು ಸ್ವಾರಸ್ಯಕರವದ ಪ್ರಸ೦ಗವನ್ನು ಬೆಳಗೆರೆ ಕೃಷ್ಣಶಾಸ್ತ್ರೀ ಅವರ ಪುಸ್ತಕ "ಸಾಹಿತಿಗಳ ಸ್ಮ್ರುತಿ" ಯಲ್ಲಿ ಬಹು ಸು೦ದರವಾಗಿ ಚಿತ್ರಿಸಿದ್ದಾರೆ. ಪುಟ: ೧೧೧.
Friday, September 25, 2009
Subscribe to:
Post Comments (Atom)
No comments:
Post a Comment